ಶೀರ್ಷಿಕೆ – ವಿಕಟ ರಸಿಕನು ಧಾತ
ವನ್ಯಮೃಗಗಳ ನಡುವೆ ಗೋವು ಬಂದಹುದೇನು? ಪಣ್ಯವೀಧಿಯಲಿ ತಾತ್ವಿಕನಿಗೇನಹುದು? ಅನ್ಯಾದುನ್ಮತ್ತ ಕೋಲಾಹಲದ ಲೋಕ ಪುಣ್ಯವನು ಚಿಂತಿಪುದೆ? – ಮಂಕುತಿಮ್ಮ|| 309 ||
ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ಆಭಾಸವನು ಸತ್ಯವೆಂದು ಬೆಮಿಸುವುದುಮ್ ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ ಅಭಿಶಾಪ ನರಕುಲಕೆ – ಮಂಕುತಿಮ್ಮ|| 310 ||
ಒಟ್ಟಿನಲ್ಲಿ ತತ್ವವಿದು; ವಿಕಟರಸಿಕನೋ ಧಾತ ತೊಟ್ಟಿಲನು ತೂಗುವನು; ಮಗುವ ಜಿಗುಟುವನು ಸಿಟ್ಟನ್ ಒಡಹುಟ್ಟುಗಳೊಳಾಗಿಪನು,ಸೋಲಿಪನು ತುತ್ತು ವಿಕಟಿಗೆ ನಾವು – ಮಂಕುತಿಮ್ಮ|| 311 ||
ಒಂದು ಜನ್ಮದ ಲೆಕ್ಕವಂದೆ ಮುಗಿವಂತೇಕೆ ಸಂಧಿಸವು ಕಾಲ ಕಾರಣ ಕರಣ ಕಾರ್ಯ ಮುಂದಕೇತಕೆ ಮಿಗಿಸಿ ಕರ್ಮಋಣಶೇಷಗಳ ಬಂಧಿಪನು ವಿಧಿ ನಿನ್ನ- ಮಂಕುತಿಮ್ಮ|| 312 ||
ಒಳ್ಳೆ ಲೆಕ್ಕಿಗನಲ್ಲ ಪರಮೇಷ್ಠಿ; ನಮ್ಮಿಂದ ಸಲ್ಲುವುದ ಕೊಳಲು ಜನ್ಮಾಂತರಕೆ ಕಾಯ್ವ ಇಲ್ಲಿ ಸಲ್ಲುವುದ ತಾನಿಂದೆ ತೀರಿಸಿಕೊಳ್ಳ- ಲೊಲ್ಲನೇನಂತಕನು – ಮಂಕುತಿಮ್ಮ|| 313 ||