ಶೀರ್ಷಿಕೆ – ಬ್ರಹ್ಮೋದ್ಯಾನ
ಕರ್ಮಋಣಶೇಷಂಗಳುಳಿಯದಿರೆ ಬಿತ್ತಾಗಿ ಜನ ಜನ್ಮಾಂತರದ ಮರಗಳೇಳದಿರೆ ಬ್ರಹ್ಮನುದ್ಯಾನವನ ಶಾಶ್ವತದೊಳಿಹುದೆಂತು ಮರ್ಮವಿದು ಸೃಷ್ಟಿಯಲಿ – ಮಂಕುತಿಮ್ಮ|| 314 ||
ಸಂಬಳದ ಹಂಬಲವೋ, ಡಾಂಬಿಕತೆಯಬ್ಬರವೋ ಇಂಬು ಕೂರ್ಮೆಯ ಕರೆಯೋ, ಕರುಳ ಕರೆಕರೆಯೋ ತುಂಬಿಹವು ಬಾಳಿನಲಿ ನೂರು ತಕರಾರುಗಳು ಬೆಂಬಲವವೆಲೋ ಜಗಕೆ – ಮಂಕುತಿಮ್ಮ|| 315 ||
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು ತಿರೆಗುರುಳುವುದು ತನ್ನ ಬಲವ ತಾಂ ಕಳೆದು ನರಮುನಂತೆಯೆ ಸುತ್ತಿ ಕಡೆಗೊಂದು ದಿನ ತೆರುವನಸ್ಥಿಯ ಧರೆಗೆ – ಮಂಕುತಿಮ್ಮ|| 316 ||
ಪುಣ್ಯಪಾಪದ ಮಿಶ್ರ ನರಜಂತುವವನ ನೆಲೆ ಮಣ್ಣು ಕರುಳುಗಳೆಸಕವವನ ಮೈದೊಡವು ಬಣ್ಣ ಬಣ್ಣದ ವಸ್ತ್ರ; ಬಿಳ್ಪೊಡನೆ ಕಪ್ಪಿಹುದು ಕಣ್ಣ ದುರುಗುಟಿಸದಿರು – ಮಂಕುತಿಮ್ಮ|| 317 ||
ಹಾಸ್ಯಗಾರನೊ ಬೊಮ್ಮ; ವಿಕಟ ಪರಿಹಾಸವದು ಆಸ್ಯ ಗಂಭೀರ; ಬೆರಲಿಂದ ಚಕಳಗುಳಿ ವಿಶ್ವಾಸದುಪಚಾರ; ಹುಣಿಸೆಮೆಣಸಾಹಾರ ವಿಶ್ವಪಾಲನೆಯಿಂತು – ಮಂಕುತಿಮ್ಮ|| 318 ||