ಶೀರ್ಷಿಕೆ – ಕಷ್ಟ ವೈವಿಧ್ಯ
ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ ಆವರಿಸದಳಲ್ ಎಲ್ಲರನುಮೊಂದೆ ಸಮಯ ನೋವಿಲ್ಲದವರು ನೊಂದವರನು ಸಂತಯಿಸುತಿರೆ ಜೀವನವು ಕಡಿದಹುದೆ? – ಮಂಕುತಿಮ್ಮ|| 629 ||
ಸ್ಥೂಲ ಸೂಕ್ಷ್ಮ ವಿವೇಕರಹಿತೇಷ್ಟ ಬಂಧುಜನ ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ಸಾಲವನು ನಿನ್ನಿಂದ ಸಲಿಸಕೊಳಬಂದವರು ತಾಳುಮೆಯಿನವರೊಳಿರು – ಮಂಕುತಿಮ್ಮ|| 630 ||
ಸರಿಗೆಪಂಚೆಯೊ ಹೊದಕೆ, ಹರಕುಚಿಂದಿಯೊ ಮೈಗೆ ಪರಮಾನ್ನಭೋಜನವೊ, ತಿರುಪೆಯಂಬಲಿಯೋ ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ ಕರುಬು ಕೊರಗೇತಕೆಲೊ – ಮಂಕುತಿಮ್ಮ|| 631 ||
ಕಿವುಡುತನ ತಪ್ಪೀತೆ ರನ್ನ ಕುಂಡಲದಿಂದ ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ ಜವರಾಯ ಸಮವರ್ತಿ – ಮಂಕುತಿಮ್ಮ|| 632 ||
ಸಾಧ್ಯಪಡದಾರಿಗಂ ನರಭಾಲಪಟ್ಟವನು ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ ಬುದ್ಧಿ ನುಡಿ ಸೈರಣೆಯೆ – ಮಂಕುತಿಮ್ಮ|| 633 ||