ಶೀರ್ಷಿಕೆ – ಆತ್ಮ ಋಣ-ಮನೆಯೆ ಮಠ
ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ಕ್ಷತಿರ್ಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ಕೃತ್ಯನಿರ್ಣಯ ಬಾಹ್ಯಲಾಭನಷ್ಟದಿನಲ್ಲ ಆತ್ಮಋಣವದು ಜಗಕೆ – ಮಂಕುತಿಮ್ಮ|| 624 ||
ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ಮುಟ್ಟಿ ಮುಟ್ಟದವೋಲುಪಾಯದಿಂ ನೋಡದನು ಗಟ್ಟಿ ಪುರುಳೇನಲ್ಲ – ಮಂಕುತಿಮ್ಮ|| 625 ||
ಕುಸುಮಸಖನೇಂ ನೀನು? ಹಿಸುಕದೆಯೆ ಮೂಸದನು ಹಿಸುಕೆ ಕಟುಕಂಪು; ನರಲೋಕವದರವೊಲೇ ಗಸಿಯ ಕಲಕದೆ ಕೊ
ಳದ ಮೇಲ್ತಿಳಿಯ ಕುಡಿದು ನಡೆ ಹಸನು ಹಗುರದ ಬಾಳು – ಮಂಕುತಿಮ್ಮ|| 626 || ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು ವಿಷದೂಟಕಿಂತುಪೋಷಿತವೆ ಲೇಸಲ್ತೆ ತೃಷೆ ಕನಲೆ, ಜೀವ ಬಿಸಿಬಾಣಲಿಗೆ ಬಿದ್ದ ಹುಳು ಶಿಶು ಪಿಶಾಚಿಯ ಕೈಗೆ – ಮಂಕುತಿಮ್ಮ|| 627 ||
ಋಣವ ತೀರಿಸಬೇಕು ಋಣವ ತೀರಿಸಬೇಕು ಋಣವ ತೀರಿಸುತ ಜಗದಾದಿಸತ್ವವನು ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು ಮನೆಯೊಳಗೆ ಮಠ ನಿನಗೆ – ಮಂಕುತಿಮ್ಮ|| 628 ||