ಶ್ರೀಮದ್ಭಗವದ್ಗೀತಾ ಪ್ರಸ್ತಾನತ್ರಯಗಳಲ್ಲೊಂದು, ಭಗವಾನ್ ವೇದವ್ಯಾಸರ ಮಹಾಭಾರತ ಇತಿಹಾಸ ಗ್ರಂಥದಲ್ಲಿ ಭಗವದ್ಗೀತೆಯು ಉಲ್ಲೇಖವಾಗಿದೆ. ಇದು 700 ಶ್ಲೋಕಗಳನ್ನು ಒಳಗೊಂಡಿದ್ದು, 18 ಅಧ್ಯಾಯಗಳಲ್ಲಿ ಕರ್ಮ, ಭಕ್ತಿ, ಮತ್ತು ಜ್ಞಾನದ ವಿಷಯಗಳನ್ನು ಹೇಳಲಾಗಿದೆ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ವಿಷಾದಕ್ಕೊಳಗಾದ ಅರ್ಜುನನಿಗೆ ಪರಬ್ರಹ್ಮ ಸ್ವರೂಪನಾದ ಶ್ರೀ ಕೃಷ್ಣನು ‘ಶ್ರೀಮದ್ ಭಗವದ್ಗೀತೆ’ಯನ್ನು ಭೋಧಿಸಿದ್ದಾನೆ. ಶ್ರೀ ಮಧುಸೂಧನ ಸರಸ್ವತಿಗಳು ಇದಕ್ಕೆ ಧ್ಯಾನಶ್ಲೋಕಗಳನ್ನು ರಚಿಸಿ ಅಧ್ಯಾಯಗಳಾಗಿ ವಿಂಗಡಿಸಿ ಅವುಗಳನ್ನು ಹೆಸರಿಸಿದ್ದಾರೆ.