ಶೀರ್ಷಿಕೆ – ಹಣೆಯ ಬರಹ
ಯುದ್ಧವಾಗಲಿ ರಾಜ್ಯವಿದ್ಯೆಯಾಗಲಿ ಶಾಸ್ತ್ರ ವೃದ್ಧಿಯಾಗಲಿ ನರನ ಹಣೆಯಿನಳಿಯಿಸದಾ ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆ- ಯಿದ್ದೆಯಿರುವುದು ನಮಗೆ – ಮಂಕುತಿಮ್ಮ|| 634 ||
ಗುದ್ದಲಿಯಿನಾದೇತೆ ಮಲೆ ಕಣಿವೆ ಸಮದ ನೆಲ? ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? ಸಿದ್ಧವಿರು ಸೈರಣೆಗೆ – ಮಂಕುತಿಮ್ಮ|| 635 ||
ಸಾಸಿರದ ಯುಕ್ತಿ ಸಾಹಸವ ನೀನೆಸಗುತಿರು ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ ಶೇಷ ನಿನಗುಳಿವುದೆಂತಾದೊಡಂ ನೋವಿನಿತು ಸೈಸದನು ನೀನಳದೆ – ಮಂಕುತಿಮ್ಮ|| 636 ||
ಸಿರಿದರಿದ್ರತೆಗಳ್ಗೆ ಫಲದೊಳoತರ ಕಿರಿದು ಸರಿತಪ್ಪುಗಳಿಗಂತು, ಜಾಣ್ ಬೆಪ್ಪುಗಳ್ಗಮ್ ಮರಣವೆಲ್ಲವನೊಂದೆ ತೆರದಿ ಮುಸುಕುವುದೆಂದೊ ಪರವೆಯೆಂತಾದೊಡೇಮ್? – ಮಂಕುತಿಮ್ಮ|| 637 ||
ನಂಬು ದೇವರ, ನಂಬು, ನಂಬೆನ್ನುವುದು ಲೋಕ ಕಂಬನಿಯನಿಡುವ ಜನ ನಂಬಲೊಲ್ಲದರೇಂ? ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? ತುಂಬು ವಿರತಿಯ ಮನದಿ – ಮಂಕುತಿಮ್ಮ|| 638 ||