ಶ್ರೀ ನಾರಾಯಣ ಮಹರ್ಷಿಗಳು ದರ್ಶಿಸಿದ ಪುರುಷ ಸೂಕ್ತವು ಋಗ್ವೇದದ ಹತ್ತನೆ ಮಂಡಲದಲ್ಲಿ ಉಲ್ಲೇಖವಾಗಿದೆ. ಇದು ಮೂರು ವಿಭಾಗವಾದ ಪೂರ್ವನಾರಾಯಣ, ಉತ್ತರ ನಾರಾಯಣ ಮತ್ತು ವೈಷ್ಣವಕಾಲಿಕೆ ಎಂಬಲ್ಲಿ ಅಡಕವಾಗಿದೆ. ಪುರುಷನೆಂದರೆ ಪೂರ್ಣನಾಗಿರುವವನು. ಇಲ್ಲಿ ಹೃದಯದಲ್ಲಿರುವ ವಿಶಾಲ, ವಿರಾಟ ರೂಪವನ್ನು ವಿವರಿಸಿದ್ದಾರೆ. ಇದರ ಫಲವು ಕೇವಲ ಆನಂದ ಸಾಕ್ಷಾತ್ಕಾರ.