ಆದಿ ಗುರು ಶ್ರೀ ಶಂಕರ ಭಗವತ್ಪಾದರ ರಚನೆ ಎಂದು ಹೇಳಲಾಗಿರುವ “ಶಿವಾನಂದಲಹರಿ”ಯು ನೂರು ಶ್ಲೋಕಗಳನ್ನೊಳಗೊಂಡಿದೆ. ಸೃಷ್ಟಿ, ಸ್ಥಿತಿ, ಲಯ ಸದಾ ಮಂಗಳಕರವೇ. ಲಹರಿ ಎಂದರೆ ಸದಾ ಆನಂದದ ಸ್ಥಿತಿಯಲ್ಲಿರುವುದು. ಜೀವಾತ್ಮನು ತನ್ನ ಬದುಕಿನ ಕೃತಕೃತ್ಯತೆಯನ್ನು ಹೊಂದಬೇಕಾದರೆ “ಶಿವಾನಂದಲಹರಿ”ಯ ಅನುಸಂಧಾನದ ಮಾರ್ಗವನ್ನು ಇಲ್ಲಿ ತಿಳಿಸಿದ್ದಾರೆ.