ಶೀರ್ಷಿಕೆ – ಜೀವ ಮರ್ಮ
ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ ಸ್ವೀಯಲಾಭಾಸ್ಮರಣೆಯುಳಿದು ವಿವದಿಗಳಾ- ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ ಶ್ರೇಯಸ್ಸಿಗುಜ್ಜುಗಿಸು – ಮಂಕುತಿಮ್ಮ|| 814 ||
ಪೌರುಷಾಶ್ವಕ್ಕಾಶೆ ಛಾಟಿ, ಭಯ ಕಡಿವಾಣ ಹಾರಾಟವದರದಾ ವೇಧೆಗಳ ನಡುವೆ ಧೀರನೇರಿರೆ, ಹೊಡೆತ ಕಡಿತವಿಲ್ಲದೆ ಗುರಿಗೆ ಸಾರುವುದು ನೈಜದಿಂ – ಮಂಕುತಿಮ್ಮ|| 815 ||
ಆರೋಗ್ಯಭಾಗ್ಯವನು ಮನಕೆ ತನುಗೆಂತಂತೆ ಹಾರಯಿಸುವೊಡೆ ಹಲವು ಸರಳನೀತಿಗಳ ಧಾರಯಿಸು ನೆನಸಿನಲಿ ನುಡಿಯಲ್ಲಿ ನಡತೆಯಲಿ ಪಾರಾಗು ಸುಳಿಯಿಂದ – ಮಂಕುತಿಮ್ಮ|| 816 ||
ಮರವ ನೀನರಿಯುವೊಡೆ ಬುಡವ ಕೀಳಲುಬೇಡ ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ ಎರೆ ನೀರ, ಸುರಿ ಗೊಬ್ಬರವ, ಕೆದಕು ಪಾತಿಯನು ನಿರಕಿಸುತ ತಳಿರಲರ – ಮಂಕುತಿಮ್ಮ|| 817 ||
ವನಜಂತುಗಳ ಸಸ್ಯಮೂಲಿಕಾಹಾರದಿಂ ಗುಣವನರಿತವರಾದಿವೈದ್ಯರೌಷಧಿಗಳ್ ಒಣತರ್ಕಗಳಿಗೇನು ? ಜೀವನದ ವಿವಿಧರಸ- ದನುಭವದಿ ತತ್ವವೆಲೊ – ಮಂಕುತಿಮ್ಮ|| 818 ||