ಶೀರ್ಷಿಕೆ – ಆತ್ಮ ಚಿಕಿತ್ಸೆ
ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ ಕೊರತೆಯೊಂದನು ನೀನು ನೆನೆನೆನೆದು ಕೆರಳಿ ಧರೆಯಲ್ಲವನು ಶಪಿಸಿ ಮನದಿ ನರಕವ ನಿಲಿಸಿ ನರಳುವುದು ಬದುಕೇನೋ ? ಮಂಕುತಿಮ್ಮ|| 644 ||
ಚಿಂತೆಸಂತಾಪಗಳು ಮನಸಿಗೆ ವಿರೇಚಕವೋ ಸಂತಸೋತ್ಸಾಹಗಳೆ ಪಥ್ಯದುಪಚಾರ ಇಂತುಂಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ ಎಂತಾದೊಡಂತೆ ಸರಿ – ಮಂಕುತಿಮ್ಮ|| 645 ||
ಶೀತವಾತಗಳಾಗೆ ದೇಹಕೌಷಧ ಪಥ್ಯ ಚೇತ ಕೆರಳಿದರೆ ಕಣ್ಣುಕಿವಿಗಳಾತುರದಿಂ ಪ್ರೀತಿಯಿಂದದನೊಲಿಸಿ ನೀತಿಯಲಿ ಶಿಕ್ಷಿಸುವ- ದಾತುಮದ ನೆಮ್ಮದಿಗೆ – ಮಂಕುತಿಮ್ಮ|| 646 ||
ಮುಕ್ತಿಯೆಂಬುದು ಮನದ ಸಂಸ್ಥಿತಿಯೆ, ಬೇರಲ್ಲ ರಕ್ತಿ ವಿಪರೀತವದಕಾಗದಿರೆ ಮುಕ್ತಿ ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ ಶಕ್ತಿವಂತನೆ ಮುಕ್ತ – ಮಂಕುತಿಮ್ಮ|| 647 ||
ತರಿದುಬಿಡು, ತೊರೆದುಬಿಡು,ತೊಡೆದುಬಿಡು ನೆನಹಿಂದ ಕರೆಕರೆಯ ಬೇರುಗಳ, ಮನದ ಗಂಟುಗಳ ಉರಕೆ ಸೊಗಸೆನಿಸಿದಾ ಪ್ರೀತಿಹಾರಮುಮ್ಮೊರ್ಮೆ ಉರುಳಪ್ಪುದಾತ್ಮಕ್ಕೆ – ಮಂಕುತಿಮ್ಮ|| 648 ||