ಆದಿಗುರು ಶ್ರೀ ಶಂಕರ ಭಗವತ್ಪಾದರ ಪ್ರಕರಣ ಗ್ರಂಥಗಳಲ್ಲೊಂದಾದ ‘ಗುರುಭಕ್ತಿ’ ಸ್ತೋತ್ರ 9 ಶ್ಲೋಕಗಳನ್ನೊಳಗೊಂಡಿದೆ. ಸುಜ್ಞಾನವೇ ಗುರು. ಪರಮ ಪ್ರೇಮವೇ ಭಕ್ತಿ. ಗುರುಭಕ್ತಿ ಎಂದರೆ ಜ್ಞಾನ ಗುರುತಿಸುವ ಪ್ರೇಮ. ಯಾವುದರಲ್ಲಿ ತದೇಕ ಚಿತ್ತವಿರುವುದೋ ಅದರ ಜ್ಞಾನ ಬರುತ್ತದೆ. ಇದನ್ನು ಸರಿಯಾಗಿ ನೋಡುವ ಜ್ಞಾನ ಕೊಡುವವನು ಗುರು.