ಯರ್ಜುವೇದದ ಆರಣ್ಯಕದ ಭಾಗವಾದ ʼಕಠೋಪನಿಷತ್ʼನಲ್ಲಿ ನಚಿಕೇತಾಗ್ನಿ ಮತ್ತು ಆತ್ಮವಿದ್ಯೆಯನ್ನು ಯಮಧರ್ಮರಾಯನು ನಚಿಕೇತನ ಮೂಲಕ ಮಾನವ ಕುಲಕ್ಕೆ ತಿಳಿಸಿದ್ದಾನೆ. ಧರ್ಮ-ಅಧರ್ಮ, ಕಾಲತ್ರಯ, ಕಾರ್ಯ-ಕಾರಣ ಸಂಬಂಧಗಳ ಕಟ್ಟುಪಾಡಿಗೆ ಸಿಗದಿರುವ ಆ ಬ್ರಹ್ಮವೇ ಎಲ್ಲದರ ಒಳಗಿರುವ ಆತ್ಮವೆಂದು ʼಕಠೋಪನಿಷತ್ʼ ಋಷಿಮುನಿ ದರ್ಶಿಸಿದ್ದಾರೆ. 3 ಅಧ್ಯಾಯಗಳ 6 ವಲ್ಲಿಗಳಲ್ಲಿ 119 ಮಂತ್ರಗಳಿವೆ.