ಶ್ರೀ ಲಕ್ಷ್ಮೀಧರ ಕವಿಗಳ ʼಅದ್ವೈತ ಮಕರಂದʼವು ೨೮ ಶ್ಲೋಕಗಳನ್ನೊಳಗೊಂಡಿದೆ. ಇದರ ವಿಷಯವನ್ನು ವೇದಾಂತದ ಕೆಲವು ಭಾಗಗಳಿಂದ ಆಯ್ದುಕೊಂಡಿದ್ದಾರೆ. ಅದ್ವೈತವೆಂದರೆ ವೇದಾಂತ ದರ್ಶನ, ಭಾವ ದರ್ಶನ ಮತ್ತು ಸ್ವಸ್ವರೂಪ ದರ್ಶನ. ಇಲ್ಲಿ ಭಗವಂತ ಒಬ್ಬನೇ ಎಂದು ತಿಳಿಸುತ್ತಿದ್ದಾರೆ. ಮಕರಂದವೆಂದರೆ ಜೇನು ಒಂದು ಕಡೆ ಸೇರಿಸುವುದು ಇಡೀ ಅದ್ವೈತ ಸಿದ್ಧಾಂತದ ಸಾರವಾಗಿದೆ.